Slide
Slide
Slide
previous arrow
next arrow

ವಿದ್ಯಾರ್ಥಿಯ ಪರಿಪೂರ್ಣ ಜೀವನಕ್ಕೆ ಓದಿನ ಜೊತೆ ಕ್ರೀಡೆಯೂ ಮುಖ್ಯ: ಡಾ.ಸತೀಶ್ ನಾಯ್ಕ್

300x250 AD

ಸಿದ್ದಾಪುರ; ಇಲ್ಲಿನ ಬೇಡ್ಕಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ. 30 ಮತ್ತು 31 ರಂದು 2024-25 ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟವನ್ನು ನಡೆಸಲಾಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಕ್ರಿಕೆಟ್ ಆಡುವುದರ ಮೂಲಕ ಕಾರ್ಯಕ್ರಮದ ಅಧ್ಯಕ್ಷರು ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ ನಾರಾಯಣ ನಾಯ್ಕ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಜಡ್ಡಿ ಸರ್ಕಾರಿ ಪ್ರೌಢಶಾಲೆಯ ರಾಘವೇಂದ್ರ ನಾಯಕ ಆಗಮಿಸಿದ್ದರು. ಮಾಧವ ನಾಯ್ಕ, ಗೋಪಾಲಕೃಷ್ಣ ಎ. ನಾಯ್ಕ, ರಾಘವೇಂದ್ರ ನಾಯ್ಕ, ಪರಮೇಶ್ವರ ಗೌಡ, ನಾರಾಯಣ ಗೌಡ ಕ್ರೀಡಾ ಸಂಚಾಲಕರು ಇವರುಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಕ್ರೀಡಾ ಶಿಸ್ತಿನ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಉದ್ಘಾಟಕರು ಹಾಗೂ ಪ್ರಾಂಶುಪಾಲರಾದ ಡಾ. ಸತೀಶ ನಾರಾಯಣ ನಾಯ್ಕ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿಯು ಕ್ರೀಡೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಕೇವಲ ಓದು ಮಾತ್ರ ವಿದ್ಯಾರ್ಥಿಯ ಪರಿಪೂರ್ಣ ಜೀವನಕ್ಕೆ ಸಾಕಾಗುವುದಿಲ್ಲ. ವಿವೇಕಾನಂದರ ವಾಣಿಯಂತೆ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎಂಬಂತೆ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿದ್ಯಾರ್ಥಿಗಳ ಮನೋಲ್ಲಾಸ, ಸಹ ಚಟುವಟಿಕೆಯಿಂದ ಕೂಡಿರುವ ಸ್ವಭಾವ, ಸಂಘಟಿತ ಪ್ರಯತ್ನ, ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಎಲ್ಲ ವಿದ್ಯಾರ್ಥಿಗಳು ಸಕ್ರಿಯಾವಾಗಿ ಕ್ರೀಡೆಯಲ್ಲಿ ಪಾಲ್ಗೊಳುವುದರ ಮೂಲಕ “ಆರೋಗ್ಯವೇ ಭಾಗ್ಯ” ಎಂಬಂತೆ ಆರೋಗ್ಯಯುತವಾದ ಜೀವನವನ್ನು ನಡೆಸಿ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ನಂತರ ಕ್ರೀಡಾ ಸಂಚಾಲಕರಾದ ನಾರಾಯಣ ಗೌಡ ಕ್ರೀಡಾ ನಿಯಮಗಳ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತೆಗೆದುಕೊಂಡು ಹೋಗುವುದರ ಮೂಲಕ ಕ್ರೀಡಾ ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಭಾವನ ನೇರವೇರಿಸಿದರು. ಸ್ವಾಗತವನ್ನು ಭಾಗ್ಯಶ್ರೀ ನೆರವೇರಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಅರ್ಚನ ನೆರೆವೇರಿಸಿದರು.

300x250 AD
Share This
300x250 AD
300x250 AD
300x250 AD
Back to top